loader image

Catholic Sabha

ನೇಜಿಗುರಿಯಲ್ಲಿ ಅದ್ದೂರಿ ತೆನೆ ಹಬ್ಬ

Report: Arun Dsouza ನೇಜಿಗುರಿ ಗುಂಪು, ಕಥೊಲಿಕ್ ಸಭಾ, ಅಂತರ್ ಧರ್ಮೀಯ ಸೌಹಾರ್ದ ಆಯೋಗ, ನೇಜಿಗುರಿ ಕ್ರಿಕೆಟರ್ಸ್ ಟೀಮ್, ನೇಜಿಗುರಿ ಸ್ವಸಹಾಯ ಸಂಘ ಮತ್ತು ನೇಜಿಗುರಿ ಧ್ವನಿ ಇವರ ಜಂಟಿ ಆಶ್ರಯದಲ್ಲಿ ನೇಜಿಗುರಿ ತೆನೆಹಬ್ಬ -2022 ದಾಮೋದರ್-ಲೀಲಾವತಿ ಮನೆಯಲ್ಲಿ ಬಹಳ ಅದ್ದೂರಿಯಲ್ಲಿ ನಡೆಯಿತು. ಮುಖ್ಯ ಅತಿಥಿಗಳು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಅದರ ಜೊತೆಗೆ ತೆನೆಯನ್ನು ಸುಲಿದು, ಅಕ್ಕಿಯನ್ನು ಪಾಯಸದೊಂದಿಗೆ ಬೆರೆಸಿ ಎಲ್ಲರೂ ಸವಿದರು. ಈ ಕಾರ್ಯಕ್ರಮದ ಅಧ್ಯಕ್ಷತೆ ವಂದನಿಯ ಜೆರಾಲ್ಡ್ ಡಿಸೋಜ ರವರು ವಹಿಸಿದ್ದರು. […]

ನೇಜಿಗುರಿಯಲ್ಲಿ ಅದ್ದೂರಿ ತೆನೆ ಹಬ್ಬ Read More »

ಕಥೋಲಿಕ್ ಸಭಾ ಶಕ್ತಿನಗರ ಇದರ ಇಪ್ಪತ್ತನೇ ವಾರ್ಷಿಕೋತ್ಸವ

Report: Arun Dsouza ಕಥೋಲಿಕ್ ಸಭಾ ಶಕ್ತಿನಗರ ತನ್ನ ಸ್ಥಾಪನೆಯ 20ನೇ ವಾರ್ಷಿಕೋತ್ಸವದ ಅಂಗವಾಗಿ ಮದರ್ ಆಫ್ ಗಾಡ್ ಚರ್ಚ್, ಮರಿಯಾಗಿರಿ, ಶಕ್ತಿನಗರದಲ್ಲಿ ಗಿಡ ನೆಡುವುದರ ಮೂಲಕ ಚಾಲನೆ ನೀಡಲಾಯಿತು. ಮುಖ್ಯ ಅತಿಥಿಯಾಗಿ ಸ್ಟ್ಯಾನಿ ಆಲ್ವಾರಿಸ್ ಬೊಂದೆಲ್ ಸಮಾಜ ಸೇವಕರು ಮತ್ತು ನಿಶಾ ಡಿಸೋಜಾ ಐ.ಸಿ.ವೈ.ಮ್ ಸಿಟಿ ವಲಯ ಅಧ್ಯಕ್ಷರು ಭಾಗವಹಿಸಿ ಶುಭ ಹಾರೈಸಿದರು. ಶಕ್ತಿನಗರ ಚರ್ಚಿನ ಧರ್ಮಗುರುಗಳು ವಂದನಿಯ ಜೆರಾಲ್ಡ್ ಡಿಸೋಜಾ, ಕಥೋಲಿಕ್ ಸಭಾ ಶಕ್ತಿನಗರ ಅಧ್ಯಕ್ಷರಾದ ಅರುಣ್ ಡಿಸೋಜ, ಕಾರ್ಯದರ್ಶಿ ಟೋನಿ ಪಿಂಟೋ, ಚರ್ಚ್

ಕಥೋಲಿಕ್ ಸಭಾ ಶಕ್ತಿನಗರ ಇದರ ಇಪ್ಪತ್ತನೇ ವಾರ್ಷಿಕೋತ್ಸವ Read More »

ಉಚಿತ ಆರೋಗ್ಯ ತಪಾಸಣಾ ಶಿಬಿರ

ಶಕ್ತಿನಗರದಲ್ಲಿ ಬಹಳ ಯಶಸ್ವಿಯಾದ ಉಚಿತ ಆರೋಗ್ಯ ತಪಾಸಣಾ ಶಿಬಿರ 2022. ‘ಆರೋಗ್ಯವೇ ಭಾಗ್ಯ’ ನಾಣ್ಣುಡಿಯಂತೆ ಸರ್ವರಿಗೂ ಆರೋಗ್ಯ ಸೇವೆ ದೊರಕಿಸಿಕೊಡುವ ಉದ್ದೇಶದಿಂದ ದಿನಾಂಕ 20 ಮಾರ್ಚ್ 2022 ಆದಿತ್ಯವಾರ ಬೆಳಿಗ್ಗೆ ಮದರ್ ಆಫ್ ಗಾಡ್ ಚರ್ಚ್ ಸಭಾಂಗಣದಲ್ಲಿ ನೆರವೇರಿತು. ಭಾರತೀಯ ಕಥೋಲಿಕ್ ಯುವ ಸಂಚಾಲನ ಶಕ್ತಿನಗರ ಘಟಕ, ಕಥೋಲಿಕ್ ಸಭಾ ಶಕ್ತಿನಗರ ಘಟಕ, ನೇಜಿಗುರಿ ಗುಂಪು, ನೇಜಿಗುರಿ ಧ್ವನಿ ಹಾಗೂ ಫಾ| ಮುಲ್ಲರ್ ಮೆಡಿಕಲ್ ಕಾಲೇಜ್ ಆಸ್ಪತ್ರೆ, ಕಂಕನಾಡಿ ಇವರ ಸಹಭಾಗಿತ್ವದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಉಚಿತ ಆರೋಗ್ಯ ತಪಾಸಣಾ ಶಿಬಿರ Read More »

ಕಥೊಲಿಕ್ ಸಭಾ ಶಕ್ತಿನಗರ ಘಟಕದಿಂದ ಅನ್ನದಾಸೋಹ ಕಾರ್ಯಕ್ರಮ ಮತ್ತು ಆಹಾರ ಕಿಟ್ ವಿತರಣೆ

News & Pics: Arun Dsouza ಕಥೊಲಿಕ್ ಸಭಾ ಮಂಗಳೂರು ಪ್ರದೇಶ(ರಿ), ಶಕ್ತಿನಗರ ಘಟಕ, ಇವರ ಆಶ್ರಯದಲ್ಲಿ ದಿನಾಂಕ 18.05.2021 ರಂದು ಮಂಗಳೂರು ಪರಿಸರದದಲ್ಲಿ ಅನ್ನದಾಸೋಹ ಕಾರ್ಯಕ್ರಮ ಏರ್ಪಡಿಸಲಾಯಿತು. ಕಾರ್ಮಿಕರಿಗೆ,ನಿರ್ಗತಿಕರಿಗೆ, ಊಟದ ಪ್ಯಾಕೆಟ್, ನೀರು ಹಾಗೂ ಮಾಸ್ಕ್ ವಿತರಿಸಲಾಯಿತು. ಅದರ ಜೊತೆಗೆ ಸರಿಯಾದ ಫಲಾನುಭವಿಗಳಿಗೆ ದೈನಂದಿನ ಅಗತ್ಯ ವಸ್ತುಗಳ ಆಹಾರ ಕಿಟ್ ವಿತರಿಸಲಾಯಿತು.

ಕಥೊಲಿಕ್ ಸಭಾ ಶಕ್ತಿನಗರ ಘಟಕದಿಂದ ಅನ್ನದಾಸೋಹ ಕಾರ್ಯಕ್ರಮ ಮತ್ತು ಆಹಾರ ಕಿಟ್ ವಿತರಣೆ Read More »

ಬೃಹತ್ ನೇತ್ರದಾನ ಜಾಗೃತಿ ಅಭಿಯಾನ

ಕಥೊಲಿಕ್ ಸಭಾ ಮಂಗಳೂರು ಪ್ರದೇಶ(ರಿ), ಶಕ್ತಿನಗರ ಘಟಕ, ಸೇವಾ ಪ್ರಕಲ್ಪ ಚಾರಿಟೇಬಲ್ ಟ್ರಸ್ಟ್(ರಿ),ಮಂಗಳೂರು ಮತ್ತು ನೇಜಿಗುರಿ ಗುಂಪು ಇವರ ಜಂಟಿ ಆಶ್ರಯದಲ್ಲಿ ಹಾಗೂ ಕೆ.ಎಂ.ಸಿ. ಆಸ್ಪತ್ರೆ, ಅತ್ತಾವರ ಮಂಗಳೂರು ಇವರ ಸಹಯೋಗದಲ್ಲಿ ಬೃಹತ್ ನೇತ್ರದಾನ ಜಾಗೃತಿ ಅಭಿಯಾನ ದಿನಾಂಕ 11.04.2021 ರಂದು ಬೆಳಿಗ್ಗೆ 8.30ಗೆ ದೇವ ಮಾತಾ ದೇವಾಲಯ ಶಕ್ತಿನಗರದಲ್ಲಿ  ಅಂದುಕೊಂಡಂತೆ ಕಾರ್ಯಕ್ರಮ ಬಹಳ ಯಶಸ್ವಿಯಾಯಿತು. 8:30 ಗಂಟೆಗೆ ನೇತ್ರದಾನದ ಕಾರ್ಯಕ್ರಮ ಆರಂಭವಾಯಿತು. ಕಥೊಲಿಕ್ ಸಭಾ ಮಂಗಳೂರು ಪ್ರದೇಶ(ರಿ), ಶಕ್ತಿನಗರ ಘಟಕದ ಅಧ್ಯಕ್ಷರಾದ ಜಾನ್ಸನ್ ಡಿಸೋಜಾ ಹಾಜರಿದ್ದ

ಬೃಹತ್ ನೇತ್ರದಾನ ಜಾಗೃತಿ ಅಭಿಯಾನ Read More »